Sunday, August 22, 2010

ಆಶಾಢ ವೈಭವ....

ನಾನು ಈ ಸಂಚಿಕೆಯಲ್ಲಿ ಹಿಂದಿನ ಸಂಚಿಕೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದೆ.  ಆದರೆ ಈ ಸಂಚಿಕೆಯಲ್ಲಿ ಅದನ್ನು ಮುಂದುವರಿಸಲಾಗಲಿಲ್ಲ ಕ್ಷಮೆ ಇರಲಿ. ನಮ್ಮ ನಾಡಿನ ಹಿರಿಯ ಕವಿಯೊಬ್ಬರು ಹೇಳಿದಂತೆ... "ಶ್ರಾವಣ ಬಂತು ಶ್ರಾವಣಾ ಕಾಡಿಗೆ ಬಂತು ನಾಡಿಗೆ....." ಹಿಂದೂ ಸಂಪ್ರದಾಯದ ಪ್ರಕಾರ ಇನು ಸಾಲು ಸಾಲು  ಹಬ್ಬಗಳು ... ನಾವು ಈಗಾಲೇ ೨ ಹಬ್ಬಗಳನ್ನು ಆಚರಿಸಿದ್ದು ಆಯಿತು. 

ನಾನು ಈಗಾಲೇ ಬರೆಯ ಬೇಕಾದ ವಿಷಯದ ಸ್ವಲ್ಪ ವಿಳಂಬವಾಗಿ ಇದನ್ನು ಬರೆದೆನೆಂದು ನನಗೆ ಅನಿಸುತ್ತಿದೆ ಯಾಕೆಂದರೆ ನಾವು ಈಗಾಗಲೇ ಶ್ರಾವಣ ಮಾಸದ ಮಧ್ಯಭಾಗದಲ್ಲಿದ್ದೇವೆ.  ಈಗ ನಾನು ಬರೆಯ ಬೇಕಾದ ವಿಷಯಕ್ಕೆ ಬರುತ್ತೇನೆ ನನಗೆ "ಆಷಾಢದ" ಮಾಸದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ, (ಅಂದರೆ ಅಂತಹ ಸಂರ್ಧಭ ಇನ್ನೂ ನನಗೆ ಬಂದಿಲ್ಲದ ಕಾರಣ) ನನಗೆ ಈ ಮಾಸ(ತಿಂಗಳು) ಎಲ್ಲಾ ತಿಂಗಳುಗಳಂತೆ. ಆದರೆ, ಇಂದಿನ ದಿನಗಳಲ್ಲಿ ಈ ಪತ್ರಿಕಾ ಮಾಧ್ಯಮ ಮತ್ತು ಟಿ.ವಿ ಮಾಧ್ಯಮಗಳಿಂದಾಗಿ ಆಷಾಢವು ಸ್ವಲ್ಪ ಹೆಚ್ಚು ಪ್ರಚಾರದಲ್ಲಿದೆ, ಈ (ಆಷಾಢ) ತಿಂಗಳನ್ನು ನವದಂಪತಿಗಳ ಪಾಲಿಕೆ ವಿಲನ್ ಎಂಬಂತೆ ಬಿಂಬಿಸುತ್ತಿದೆ.  ಆಷಾಢ ಮಾಸದಲ್ಲಿ ನವದಂಪತಿಗಳು ಒಟ್ಟಿಗೆ ಇರಬಾರದು, ವಧುವು ಅವಳ ತವರಿಗೆ ಹೋಗುವ ಸಂಪ್ರದಾಯದ ಬಗ್ಗೆ ಕೇಳಿ ಗೊತ್ತೇ ವಿನಃ ಸ್ವಾನುಭವವಿಲ್ಲ. ಅದೇನೇ ಆದರೂ ಆಷಾಢವು ನವದಂಪತಿಗಳ ಪಾಲಿಗೆ ಘೋರ ನರಕವಂತೆ.

ನಾನು ದಿನಾಲು ಆಫೀಸಿಗೆ ಬಸ್ಸಿನಲ್ಲಿಯೇ ಹೋಗುವುದು, ಅದಕ್ಕೆ ಕಾರಣ ನನ್ನ ಮನೆಯಿಂದ ಆಫೀಸು ಹತ್ತಿರ. ಆದರೆ ನಾನು ಬಸ್ಸಿನಲ್ಲಿ ಪ್ರಯಾಣಿಸುವಾಗ ಸಾಮಾನ್ಯವಾಗಿ ಪುಸ್ತಕವನ್ನು ಓದುವ ಅಭ್ಯಾಸ. ತೀರಾ ಕೆಲ ಅನಿವಾರ್ಯ ಸಂಧರ್ಬದಲ್ಲಿ ಮಾತ್ರ ಮೊಬೈಲಿನಲ್ಲಿ ಎಫ್ ಎಂ. ಆಲಿಸುತ್ತೇನೆ.

ಕೆಳೆದ ತಿಂಗಳು ಅದೊಂದು ದಿನ ನಾನು ಎಂದಿನಂತೆ ಪ್ರಯಾಣಿಸುವವೇಳೆ ಪುಸ್ತಕವನ್ನು ಹೊರತೆಗೆದು ಓದಲು ಪ್ರಾರಂಭಿಸಬೇಕು, ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳ ಗುಂಪೊಂದು ತುಂಬಾ ದೊಡ್ಡ ಧ್ವನಿಯಲ್ಲಿ ರೋಡಿಯೋವನ್ನು ಹಾಕಿ ಬೇರೆಯವರಿಗೆ ತೊಂದರೆ, ಕಿರಿಕಿರಿಯನ್ನು ಮಾಡಿ ನನ್ನ ಓದಿಗೆ ಪೂರ್ಣವಿರಾಮವಿತ್ತರು, ಅವರಿಗೆ ಗದರಿ ಬುದ್ಧಿ ಹೇಳೋಣವೆಂದರೆ ಅವರ ಸಂಖ್ಯೆಯು ತುಂಬಾ ಇತ್ತು.  ಇದು ಆಗುವ ಕೆಲಸವಲ್ಲ ಎಂದು ಅರಿತು ಸುಮ್ಮನಾಗಿ ಪುಸ್ತಕವನ್ನು ಬ್ಯಾಗಿನಲ್ಲಿ ಸೇರಿಸಿ, ನಾನೂ ಸಹ ನನ್ನ ಮೊಬೈಲಿನಲ್ಲಿ ಎಫ್.ಎಂ ಹಾಡುಗಳನ್ನು ಕೇಳಿ ಆನಂದಿಸುತ್ತಿದೆ.  ಅದೇ ಸಂಧರ್ಭದಲ್ಲಿ "ವೀರಮದಕರಿ" ಚಿತ್ರದ "ಜುಂ ಜುಂ ಮಾಯ ಹಾಡು ಪ್ರಸಾರವಾಗುತ್ತಿತ್ತು" ಸಾಮಾನ್ಯವಾಗಿ ನಾನು ಹಾಡುಗಳನ್ನು ಕೇಳುವಾಗ ಮೊದಲು ಅದರ ಸಾಹಿತ್ಯವನ್ನು ತಿಳಿದು, ಆಮೇಲೆ ಸಂಗೀತ ಮೊದಲಾದುವುಗಳನ್ನು ಎನ್ಜಾಯ್ ಮಾಡುತ್ತೇನೆ. ಅದೇಕೋ ಈ ಹಾಡಿನ ಸಾಲುಗಳು ತುಂಬಾ ಇಷ್ಟವಾದವು. ಆಫೀಸಿಗೆ ಹೋದನಂತರ ಅದನ್ನು ಆನ್ ಲೈನಿನಿಂದ ಡೌನ್ ಲೋಡ್, ಮಾಡಿ ಪದೇ ಪದೇ ಕೇಳಿದೆ. ನನ್ನ ಸಹದ್ಯೋಗಿಯೊಬ್ಬರ ನೆರವಿನಿಂದ ಅದರ ಸಾಹಿತ್ಯವನ್ನು ಸಹಾ ಡೌನ ಲೋಡ್ ಮಾಡಿಕೊಂಡೆ.  ಆಗ ನನಗೆ ಎನೋ ಹೊಳೆದವನಂತೆ, ಇದೇ ರೀತಿ ಇರಬೇಕು ಆಷಾಡದ ನವದಂಪತಿಗಳ ವೇದನೆ ಎಂದಿನಿಸುತು. ಈ ಸಾಲುಗಳು ಹೀಗಿವೆ..

ಕುಂತಲ್ಲಿ ಕೂರೊಂಗಿಲ್ಲ, ನಿಂತಲ್ಲಿ ನಿಲ್ಲೊಂಗಿಲ್ಲ
ಏನೇನೋ ಆಗ್ತೈತಲ್ಲ, ಹೇಳೊಕೆ ಮಾತೆ ಇಲ್ಲ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಏನಿದು ಮಾಯ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಏನಿದು ಮಾಯ

ನೆಟ್ಟಗೆ ನಿದ್ದೆ ಇಲ್ಲ, ಹೊಟ್ಟೆಗೆ ಹಸಿವೆ ಇಲ್ಲ
ಘಂಟೆಗೆ ಲೆಕ್ಕ ಇಲ್ಲ, ಡ್ಯುಟಿಗೆ ಹೋಗ್ತಾ ಇಲ್ಲ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ

ಯವ್ವಿ ಯವ್ವಿ ಯವ್ವಿ ಯವ್ವಿ ಯಾ
ಯವ್ವಿ ಯವ್ವಿ ಯವ್ವಿ ಯವ್ವಿ ಯಾ

ಏನಾರ ಮಾತಾಡೊ ಓ ಮಹರಾಯ
ಈಗ್ಯಾಕೆ ಹರಿಕತೆ ಬೇಡಮ್ಮಯ್ಯ
ಕಣ್ಣಾ ಮುಚ್ಚೆ ಆಟನಾರು ಆಡೊಣಯ್ಯ
ಉಪ್ಪು ಮೂಟೆಗಾದ್ರೆ ಈಗ ನಾನು ಸೈಯ್ಯ
ಮೈಗೆ ಮೈಯ ತಾಗೂದು ಕಷ್ಟನಯ್ಯ
ಅದುವೆ ನನ್ನ ಇಷ್ಟನೆ ಓ ಅಮ್ಮಯ್ಯ
ಅಬ್ಬಬ್ಬ ಈ ಹುಡುಗ ತುಂಬಾನೆ ತುಂಟನೊ
ಹಿಡಿಯೋದು ಹೇಗಿವನನ್ನ

ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ಐ ಕಾನ್ ಸೀ ನತ್ತಿಂಗ್ ನತ್ತಿಂಗ್, ಐ ಕಾನ್ ಹಿಯರ್ ನತ್ತಿಂಗ್ ನತ್ತಿಂಗ್
ಐ ಕಾನ್ ಫೀಲ್ ನತ್ತಿಂಗ್ ನತ್ತಿಂಗ್, ಐ ಕಾನ್ ಡೊ ನೋವೇರ್ ನೊವೇರ್
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ

ಸರಸರ ಸರಸರ ಬಾ ಸರಸಕ್ಕೆ
ಅವಸರ ಕಾರಣ ಅಪಘಾತಕ್ಕೆ
ನನ್ನ ಮೇಲೆ ಯಾಕೆ ಇಲ್ಲ ನಂಬಿಕೆ ನಿಂಗೆ
ಅನ್ಮಾನ ನಿನ್ನಿಗಿಂತ ನನ್ ಮೇಲ್ ನಂಗೆ
ಹಸಿದಾಗ ಸಿಕ್ಕರೆ ಬೆಲೆ ಊಟಕ್ಕೆ
ಸದ್ಯಕ್ಕೆ ಸಕ್ಕರೆ ಮುತ್ತಿದು ಸಾಕೆ
ಮುತ್ತಿಂದ ಮೊದಲಾಗಿ ನಾ ಮುಂದುವರಿದರೆ
ತಡಿಬೇಡ ನನ್ನನು ನೀನು

ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ತಿರುಪತಿ ವೆಂಕ್ರಮಣ ಸ್ವಾಮಿ
ಬೇಲೂರ ಚೆನ್ಕೇಶ ಸ್ವಾಮಿ
ಧರ್ಮಸ್ಥಳ ಮಂಜುನಾಥ್ ಸ್ವಾಮಿ
ನನ್ ಗತಿ ಯೆನು ಸ್ವಾಮಿ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ
ಜುಮ್ ಜುಮ್ಮಾಯ ಜುಮ್ ಜುಮ್ಮಾಯ
ಪ್ರಾಯ ಬಂದ್ರೆ ಹೃದಯ ಗಾಯ

ಹುಡುಗ-ಹುಡುಗಿ ಪ್ರಾಯಕ್ಕೆ ಬಂದ ಮೇಲೆ, ಮನೆಯವರು ಅವರಿಗೆ ಒಂದು ಒಳ್ಳೆ ಸಂಬಂಧವನ್ನು ನೋಡಿ ಮದುವೆ ಮಾಡಿಕೊಟ್ಟು ತಮ್ಮ ಜವಾಬ್ದಾರಿಯನ್ನು ಪೂರೈಸಿಕೊಳ್ಳುತ್ತಾರೆ. ಆದರೆ ಮದುವೆಯಾದ ನವಜೋಡಿಗಳ ಜೀವನದಲ್ಲಿ ಬರುವ ಈ ಆಷಾಢವು... ಅವರನ್ನು ಬೇರೆಮಾಡುತ್ತದೆ, ಈ ಸಂಧರ್ಭದಲ್ಲಿ ಈ ಹಾಡು ತುಂಬಾ ಸರಿಯಾಗಿ ಅವರಿಗೆ ಹೊಲುತ್ತದೆ ಎಂದೆನಿಸಿತು.

ಪಾಪ ಆ ದಂಪತಿಗಳಿಗೆ, ಅವಳಿಗೆ ಅವನ, ಅವನಿಗೆ ಅವಳ ನೆನಪಲ್ಲಿ "ನೆಟ್ಟಗೆ ನಿದ್ದೆ ಇಲ್ಲ, ಹೊಟ್ಟೆಗೆ ಹಸಿವೆ ಇಲ್ಲ, ಘಂಟೆಗೆ ಲೆಕ್ಕ ಇಲ್ಲ, ಡ್ಯುಟಿಗೆ ಸರಿಯಾಗಿ  ಹೋಗ್ತಾ ಇಲ್ಲ (ಆಫೀಸಿನವರಿಗೂ ತೊಂದರೆ)... ಆದರೆ ಈಗಿನ ಕಾಲದಲ್ಲಿ ಒಂದು ಅನುಕೂಲವೆಂದರೆ, ಇದು ಮೊಬೈಲ್ ಯುಗ ಆಗಿರುವದರಿಂದ ಕಷ್ಟ-ಸುಖ ಫೋನಿನ ಮುಖಾಂತರ ಹಂಚಿಕೊಳ್ಳ ಬಹುದು... ನೀವು ಈ ಹಾಡಿನ ಪ್ರತಿಯೊಂದು ಸಾಲನ್ನು ಆ ನವದಂಪತಿಗಳಿಗೆ ಹೋಲಿಸಿ ನಿಮ್ಮದೇ ಆದ ರೀತಿಯಲ್ಲಿ ಆನಂದಿಸಿ.... ಏಕೆಂದರೆ ನಾನು ತೀರಾ ವಿವರವಾಗಿ ಬರೆಯ ಹೋದರೆ ಪುಟಗಟ್ಟಲೆ ಆಗಬಹುದು.... ಆದ್ದರಿಂದ ನೀವೇ ಪ್ರಯತ್ನಿಸಿ.... ನೀವೂ ಅವರ ವಿರಹವನ್ನು ಅನುಭವಿಸಿ....

4 comments:

  1. ಏನೋ ವಸು ಎನ್ ತಮ್ಮ ಅನುಭವದ ಮಾತಾ ಅಥವಾ !!!!
    ಚೆನ್ನಾಗಿದೆ ಆಷಾಡ ಲೇಖನ .

    ReplyDelete
  2. @ Shashi jois : ಅಲ್ಲ ಇದು ನನ್ನ ಸ್ವಂತ ಅನುಭವ ಅಲ್ಲ....ಧನ್ಯವಾದಗಳು...:)

    ReplyDelete
  3. This comment has been removed by the author.

    ReplyDelete
  4. ಏಯ್ ವಸ್ "ರವಿ ಕಾಣದ್ದನ್ನು ಕವಿ ಕಂಡ ಅನ್ನೋ ಹಾಗಿದೆ" ನಿನ್ನ ಲೇಖನ....mhh its nice...

    ReplyDelete